ದುರ್‍ವಿನೀತ

ಸಿಗದ ಅನಂತ ಆಕಾಶದೆದುರು
ಸಿಕ್ಕದ್ದು ಒಂದು ಹಿಡಿ ಹೊಟ್ಟು,
ಅದನ್ನೇ ತೊಟ್ಟು
ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ
ಮರೆದಿದ್ದೇನೆ ನಾಚಿಕೆ ಬಿಟ್ಟು

ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ
ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ ಚೆಲ್ಲಿದೆನ?
ಸಿಂಹದಂತೆ ಬಂದು ಪೆಟ್ಟು ತಿಂದು ಕತ್ತೆ ಕೂಗಿದೆನ?
ಎರಡವ್ನ ಎಂಟಕ್ಕೆ ಎತ್ತಿ ಏಳರ ತಲೆ ತೆಗೆದೆನ?
ಕೂಗಿನಲ್ಲಿ ವಜಾಹೋಗಿ ಕೆಲಸದಲ್ಲಿ ಜಮಾ ಅಗಿ
ನಾಚಿಕೆ ಯಾಕೆ ನನಗೆ ನಾಚಿಕೆ ಯಾಕೆ?

ಕಲ್ಲುನೆಲ ಸಿಕ್ಕರೇನು ಅದರಲ್ಲಿ
ನಿನ್ನಂಥ ಗುಲಾಬಿ ಬೆಳೆದಿಲ್ಲವ?
ರೂಪ ಧೂಪ ಹರಸಿ ಮೈಗೆ
ಹಸಿರು ಹಾಸಿಗೆ ಇತ್ತಿಲ್ಲವ?
ಗರ್ಭಗುಡಿ ತನಕ ಹೊತ್ತು ನಿನ್ನ
ದೇವರ ತಲೆಗೆ ಏರಿಸಿಲ್ಲವ?

ವ್ಯಾಕರಣದ ಗಡೀಪಾರುಗಳನ್ನ
ವಿಚಿತ್ರ ಲಯಕ್ಕೆ ಹಿಡಿಯುತ್ತ
ಮಾತಿನ ಮಣ್ಣಗೊಂಬೆಗಳನ್ನ
ಅರ್ಥದ ಹೊಳೆಯಲ್ಲಿ ಕರಗಿಸುತ್ತ
ಅನುಭವದ ಸೀರೆ ಕುಪ್ಟಸವನ್ನ
ಧ್ವನಿಮಂಚದಲ್ಲಿ ಸುಲಿಯುತ್ತ
ಪಟ್ಟ ಆನಂದಕ್ಕೇನು ಬೆಲೆಯೇ ಇಲ್ಲವ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಪಾಣಿಪತ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys